ತಾಳಮದ್ದಳೆಯಿಂದ ಕನ್ನಡ ಜಾಗೃತಿ : ಎ. ಜೆ. ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ನವ೦ಬರ್ 19 , 2014
|
ನವ೦ಬರ್ 19, 2014
|
ತಾಳಮದ್ದಳೆಯಿಂದ ಕನ್ನಡ ಜಾಗೃತಿ : ಎ. ಜೆ. ಶೆಟ್ಟಿ
ಮಂಗಳೂರು :
ಯಕ್ಷಗಾನ ತಾಳಮದ್ದಳೆ ಪ್ರಕಾರ ಶುದ್ಧವಾದ ಕನ್ನಡ ಭಾಷಾ ಪ್ರಯೋಗದ ಮೂಲಕ ಕನ್ನಡ ನಾಡು-ನುಡಿಯ ಜಾಗೃತಿಗೆ ಶ್ರೇಷ್ಠ ಕೊಡುಗೆ ನೀಡಿದೆ. ಇದು ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಮೇಲೂ ಮಹತ್ವದ ಪ್ರಭಾವ ಬೀರಿದೆ ಎಂದು ಕದ್ರಿ ಶ್ರೀ ಮಂಜುನಾಥ ದೇವಾಲಯದ ಆಡಳಿತ ಮೊಕ್ತೇಸರ, ಎ. ಜೆ. ಸಮೂಹ ಸಂಸ್ಥೆಗಳ ಮುಖ್ಯಸ್ಥ ಹಾಗೂ ಯಕ್ಷಾಂಗಣದ ಗೌರವಾಧ್ಯಕ್ಷ ಎ. ಜೆ. ಶೆಟ್ಟಿ ಹೇಳಿದ್ದಾರೆ.
ಯಕ್ಷಗಾನ ಚಿಂತನ- ಮಂಥನ ಮತ್ತು ಪ್ರದರ್ಶನ ವೇದಿಕೆ ಯಕ್ಷಾಂಗಣ ಮಂಗಳೂರು ಇವರು ಮಂಗಳೂರು ವಿಶ್ವವಿದ್ಯಾನಿಲಯದ ಡಾ| ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಆಯೋಜಿಸಿದ ಯಕ್ಷಗಾನ ತಾಳಮದ್ದಳೆ ಸಪ್ತಾಹ- , ಸಂಸ್ಮರಣ- ಗ್ರಂಥ ಅನಾವರಣ ಮತ್ತು ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಪ್ರಶಸ್ತಿ ಪ್ರದಾನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ದೀಪೋಜ್ವಲನ ಮಾಡಿ ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಿಸಿದರು. ಸುಮಾರು 58 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಮನಃಪೂರ್ವಕವಾಗಿ ತೊಡಗಿಸಿಕೊಂಡ ತೃಪ್ತಿ ಇದೆ. ಯಕ್ಷಗಾನ ತನ್ನಂತಹ ಅನೇಕ ಕಲಾವಿದರಿಗೆ ಪುನರ್ಜನ್ಮ ನೀಡಿದೆ ಎಂದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಲುವಾಗಿ ಅವರನ್ನು ಯಕ್ಷಾಂಗಣದ ವತಿಯಿಂದ ಸಮ್ಮಾನಿಸಲಾಯಿತು. ಮುಂಬಯಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ಸ್ಮೃತಿ ಸಂಪುಟ ಯಕ್ಷರಚೆನ್ನ ಗ್ರಂಥ ಅನಾವರಣ ಮಾಡಿದರು. ಚೆನ್ನಪ್ಪ ಶೆಟ್ಟರ ಪತ್ನಿ ಹೇಮಲತಾ ಮತ್ತು ಪುತ್ರ ಭವನ ಗ್ರಂಥದ ಪ್ರತಿಯನ್ನು ಸ್ವೀಕರಿಸಿದರು. ಗ್ರಂಥದ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಕೃತಿಯ ಬಗ್ಗೆ ಮಾತನಾಡಿ, ಗ್ರಂಥ ಪ್ರಕಟನೆಗೆ ಕಾರಣರಾದ ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ಮಿತ್ರರನ್ನು ಅಭಿನಂದಿಸಿದರು.
ಆಶಯ ಭಾಷಣ ಮಾಡಿದ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಕೆ. ಚೆನ್ನಪ್ಪ ಗೌಡ ಯಕ್ಷಗಾನ ಕ್ಷೇತ್ರದಲ್ಲಿ ಆಗುವ ಪ್ರಯೋಗಗಳು ಯಕ್ಷಗಾನವನ್ನು ಚೆಂದಗೊಳಿಸಬೇಕು. ಜ್ಞಾನಪ್ರಸರಣಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದ ತಾಳಮದ್ದಳೆ ಪ್ರಕಾರವನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಶುಭಾಶಂಸನೆಗೈದರು. ವಿ.ವಿ. ಕಾಲೇಜು ಪ್ರಾಂಶುಪಾಲ ಡಾ| ಸತ್ಯನಾರಾಯಣ ಮಲ್ಲಿಪಟ್ಣ, ಯಕ್ಷಾಂಗಣ ಸಂಚಾಲಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ಕೆ. ಲಕ್ಷಿ$¾àನಾರಾಯಣ ಹರೇಕಳ, ಸುಧಾಕರ ರಾವ್ ಪೇಜಾವರ, ವಕ್ವಾಡಿ ಶೇಖರ ಶೆಟ್ಟಿ, ಎಂ. ಜೆ. ರಾವ್, ಚಂದ್ರಶೇಖರ್ ರೈ ಜೆಪ್ಪು, ನಿವೇದಿತಾ ಎಸ್. ಶೆಟ್ಟಿ, ಶೋಭಾ ಕೇಶವ ಉಪಸ್ಥಿತರಿದ್ದರು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ನಿರೂಪಿಸಿದರು. ಉಪಾಧ್ಯಕ್ಷ ಅತ್ತಾವರ ಶಿವಾನಂದ ಕರ್ಕೇರ ವಂದಿಸಿದರು. ಬಳಿಕ ರುಕಾ¾ಂಗದ ತಾಳಮದ್ದಳೆ ಜರಗಿತು.
ಕೃಪೆ :
http://www.udayavani.com
|
|
|